ಕಾಲನ ಕರೆ

ಅತಿ ಜರೂರು ಕರೆ
ಓಗೊಟ್ಟು ನಡೆಯಲೇ ಬೇಕು
ದೂಡಲಾಗದು ಮುಂದೆ
ಹೇಳಲಾಗದು ನೂರು ನೆಪ

ಅವ ದೂರ್ತನೆಂದರೂ ಬದುಕಿಗೆ
ಬಾರದಿರೆ ಸಾಕೆಂದರೂ
ದುತ್ತೆಂದು ಹೆಗಲೇರಿ
ತಳ್ಳಿ ಬಿಡುವ ಕೂಪಕ್ಕೆ

ಮುಗ್ಧ ಎಸಳುಗಳ ಕೂಡ
ಕೊಚ್ಚಿ ಹಾಕುವ ಕ್ರೂರ
ಕಣ್ಣೀರ ಧಾರೆಗೂ
ಆರ್ತನಾದಕ್ಕೂ ಕಿವುಡನವ

ಚಿಗುರೆಲೆಗೆ ಶರದೃತುವಿನಂತೆ
ಕರುಣೆಯಿಲ್ಲದೆ ಕರಕಲಾಗಿಸುವ
ಬಯಕೆ ಹೊತ್ತವ

ಎಷ್ಟೊಂದು ಕನಸುಗಳಿವೆ
ಮುಸ್ಸಂಜೆಯ ಮಾತುಗಳು ಬಾಕಿಯಿವೆ
ನಕ್ಷತ್ರಗಳ ಹಾದಿಯಲಿ ಬಯಕೆಗಳ ಮೂಟೆ
ಮಾರಲಿದೆ, ಕೊಳ್ಳಲಿದೆ
ಮೈಮನಗಳ ಸುಳಿಯಲಿ ತೇಲುವುದಿದೆ

ಅದಕ್ಕೆ
ಕೆಂಡ ಮಾರುವವನ ಸಹವಾಸ ಬೇಕಿಲ್ಲ ಎಂದರೂ
ಸಾರಿ ಬರುವ ಸರದಾರನ
ಅಪ್ಪುಗೆಯ ತೆಕ್ಕೆಗೆ ಬಿದ್ದರೆ – ಬಲಿ


Previous post ಹೇಳಲೇಬೇಕಾದ ಮಾತುಗಳು
Next post ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys